ಎಕ್ಸಾಂ ಬರೆದಿದ್ದೇವೆ, ರಿಸಲ್ಟ್ಗೋಸ್ಕರ ಕಾಯ್ತಿದ್ದೇವೆ: ಸಿ.ಪಿ ಯೋಗೇಶ್ವರ್ | ಜನತಾ ನ್ಯೂಸ್
ಬೆಂಗಳೂರು : ನಾವು ಪರೀಕ್ಷೆ ಬರೆದಿದ್ದೇವೆ. ಇದೀಗ ಫಲಿತಾಂಶಕ್ಕೋಸ್ಕರ ಕಾಯ್ದಿದ್ದೇವೆ. ಕೆಲವೊಂದಿಷ್ಟು ಸಮಸ್ಯೆಗಳಿದ್ದವು. ನಾಲ್ಕು ಗೋಡೆಗಳ ಮಧ್ಯೆ ಹೇಳಿದ್ದೇವೆ. ಆ ರಿಸಲ್ಟ್ ಬರಬೇಕಲ್ಲ. ಬಂದಾಗ ನೋಡೋಣ ಎಂದು ಸಚಿವ ಸಿ ಪಿ ಯೋಗೇಶ್ವರ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಗ್ಗೆ ನನಗೆ ಗೌರವವಿದೆ. ಅವರು ಇನ್ನೂ ಎರಡು ವರ್ಷ ಇರಲಿ,ತಪ್ಪೇನು ಇಲ್ಲ. ನಮ್ಮ ನೋವು,ಸಮಸ್ಯೆ ಮೊದಲೇ ಹೇಳಿದ್ದೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟಿಸಬೇಕು. ಇದನ್ನ ನಾವು ಎಲ್ಲಿ ಹೇಳಬೇಕು ಹೇಳಿದ್ದೇವೆ. ಅವರು ಇದರ ಬಗ್ಗೆ ನಿರ್ಧಾರ ಮಾಡುತ್ತಾರೆ. ನಮ್ಮ ಹಿರಿಯರು ತೀರ್ಮಾನ ಮಾಡ್ತೇವೆ ಅಂದಿದ್ದಾರೆ. ಅವರ ನಿರ್ಧಾರದ ಕಡೆ ನೋಡ್ತಿದ್ದೇವೆ ಎಂದರು.
ನನಗೆ ಯಾವುದೇ ಉಸ್ತುವಾರಿ ಕೊಟ್ಟಿಲ್ಲ. ಕೋಲಾರಕ್ಕೆ ಅರವಿಂದ ಲಿಂಬಾವಳಿಗೆ ನೀಡಿದ್ದಾರೆ. ಉಸ್ತುವಾರಿ ಕೊಡುವುದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ರಾಜ್ಯದಲ್ಲಿನ ಪ್ರವಾಸಿ ತಾಣ ಓಪನ್ ಮಾಡುತ್ತೇವೆ. ಕೋವಿಡ್ ಮಾರ್ಗಸೂಚಿ ಅಳವಡಿಸಿಕೊಂಡು ಪ್ರವಾಸೋದ್ಯಮಕ್ಕೆ ಅನುವು ಮಾಡಲಾಗುವುದು. ಜಂಗಲ್ ಲಾಡ್ಜ್ ಸಹ ಓಪನ್ ಮಾಡಲಾಗುವುದು ಎಂದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ನಿರ್ಣಯದ ಬಗ್ಗೆ ನನಗೆ ಮಾಹಿತಿಯಿಲ್ಲ. ವೈಯಕ್ತಿವಾಗಿ ಅವರ ಜೊತೆಯಲ್ಲೇ ಇದ್ದೇನೆ. ೨೦ ವರ್ಷಗಳಿಂದಲೂ ಅವರ ಜೊತೆಯಲ್ಲಿದ್ದೇವೆ ಅವರು ರಾಜೀನಾಮೆಯಂತ ಪ್ರಯತ್ನಕ್ಕೆ ಹೋಗಿಲ್ಲ ಎಂದಿದ್ದಾರೆ.